This website is a showcase for the articles, campaigns and discussion related to rational and ethical ways in medicine and health care. Take Part in the Discussion, or leave us a word. You too can participate.

ಆರೋಗ್ಯವೇ ಭಾಗ್ಯ ಎನ್ನುವ ಮಾತು ಸಾರ್ವಕಾಲಿಕವಾದ ಸತ್ಯ. ಆರೋಗ್ಯ ಯಾರಿಗೆ ಬೇಡ? ಈ ಜಾಗತೀಕರಣದ ಯುಗದಲ್ಲಿ ನಾವು ದಿನ ನಿತ್ಯ ಬಳಸುವ ನೀರು, ಉಪ್ಪು, ಧಾನ್ಯಗಳು, ಹಣ್ಣು-ತರಕಾರಿಗಳು ಇತ್ಯಾದಿ 'ಅವಶ್ಯಕ ವಸ್ತು'ಗಳಂತೆಯೇ, 'ಆರೋಗ್ಯ ಸೇವೆ'ಯೂ ಬೃಹತ್ ಉದ್ದಿಮೆದಾರರ ಹೂಡಿಕೆಗೊಂದು ರಂಗವಾಗಿಬಿಟ್ಟಿದೆ. ಆರೋಗ್ಯ ರಕ್ಷಣೆಯು ವ್ಯಾಪಾರವಾದಂತೆ, ವೈದ್ಯಕೀಯ ಶಿಕ್ಷಣವೂ ಖಾಸಗೀಕರಣಗೊಂಡು ಮೌಲ್ಯಗಳು ಶಿಥಿಲಗೊಳ್ಳುತ್ತಿವೆ. ಒಪ್ಪೊತ್ತು ಊಟವನ್ನೂ ಸರಿಯಾಗಿ ಮಾಡಲಾರದ ಕೋಟಿಗಟ್ಟಲೆ ಭಾರತೀಯರ ಮತಗಳನ್ನು ಪಡೆದು ಅಧಿಕಾರಗ್ರಹಣ ಮಾಡಿರುವ ಸರಕಾರಗಳು, ಜನರಿಗೆ ಮೂಲಭೂತ ಆರೋಗ್ಯಸೇವೆಯನ್ನು ಒದಗಿಸುವ ಜವಾಬ್ದಾರಿಯನ್ನು ನಿಭಾಯಿಸುವ ಬದಲು, ಖಾಸಗಿ ರಂಗದ 'ಆಸ್ಪತ್ರೆ ಉದ್ದಿಮೆಗಳಿಗೆ' ಬೇಕಾದೆಲ್ಲವನ್ನೂ ನೀಡಿ, 'ವೈದ್ಯಕೀಯ ಪ್ರವಾಸೋದ್ಯಮ'ದ ಡಂಗುರ ಬಾರಿಸುತ್ತಾ ಅತುಲ್ಯ ಭಾರತದ ಕನಸನ್ನು ತೋರಿಸುವಲ್ಲಿ ನಿರತವಾಗಿವೆ.

ಆರೋಗ್ಯವನ್ನು ಕೆಡಿಸಿ (ಸಂಸ್ಕರಿತ, ತ್ಯಾಜ್ಯ ಆಹಾರಗಳು, ಪರಿಸರ ಮಾಲಿನ್ಯ, ಕೀಟನಾಶಕಗಳು ಇತ್ಯಾದಿಗಳಿಂದ), ಇಲ್ಲದ ರೋಗಗಳನ್ನು ಸೃಷ್ಟಿಸಿ (ಕೊಲೆಸ್ಟರಾಲ್ ಇತ್ಯಾದಿ), ಈ 'ರೋಗಗಳ' ಚಿಕಿತ್ಸೆಗೆ ಬೇಕಾದ ಔಷಧಗಳನ್ನೂ, ಇತರ ವ್ಯವಸ್ಥೆಗಳನ್ನೂ ನಿರ್ಮಿಸಿ ಅಮಾಯಕ ಜನಸಾಮಾನ್ಯರ ಆರೋಗ್ಯ, ಮನಃಶ್ಶಾಂತಿ ಮತ್ತು ಹಣಗಳೆಲ್ಲವನ್ನೂ ಹಾಳುಗೆಡವುತ್ತಿರುವ ಇಂದಿನ ಸನ್ನಿವೇಶದಲ್ಲಿ ಆರೋಗ್ಯರಕ್ಷಣೆಯ ಹಾಗೂ ಆರೋಗ್ಯಸೇವೆಯ ಒಳ-ಹೊರಗುಗಳ ಬಗ್ಗೆ ಅರಿವನ್ನು ಮೂಡಿಸುವ ಕಿರುಪ್ರಯತ್ನವಿದು. ಸ್ವತಂತ್ರ ಚಿಂತನೆಯ ಕೆಲಮಂದಿ ವೈದ್ಯರ ಈ ಉಪಕ್ರಮದಲ್ಲಿ ಭಾಗಿಗಳಾಗಲು ನಿಮಗಿದೋ ಸ್ವಾಗತ!

ಚರ್ಚೆಗಳಲ್ಲಿ ಪಾಲ್ಗೊಳ್ಳಿ, ಅಥವಾ ನಮಗೆ ಬರೆಯಿರಿ. ನೀವೂ ಭಾಗಿಗಳಾಗಿ.

ಶಾಲಾ ವಿದ್ಯಾರ್ಥಿಗಳಿಗೆ ಕಡ್ಡಾಯ ಯೋಗಶಿಕ್ಷಣದ ಅಗತ್ಯವಿಲ್ಲ

ಕರ್ನಾಟಕ ಸರಕಾರವು ರಾಜ್ಯದ ಶಾಲೆಗಳಲ್ಲಿ ಯೋಗಶಿಕ್ಷಣವನ್ನು ಕಡ್ಡಾಯಗೊಳಿಸುವ ಯೋಜನೆಯನ್ನು ಹಾಕಿಕೊಂಡಿದ್ದು, ಈ ಬಗ್ಗೆ ಮಾಹಿತಿ ಕಾಯಿದೆಯಡಿಯಲ್ಲಿ ನಾವು ಪಡೆದಿರುವ ವಿವರಗಳನ್ನು ಗಮನಿಸಿದರೆ, ರಾಜ್ಯಾದ್ಯಂತ ಒಂದನೇ ತರಗತಿಯಿಂದಲೇ ಮಕ್ಕಳಿಗೆ ಯೋಗ ತರಬೇತಿಯನ್ನು ನೀಡುವ ಯೋಜನೆಯಿರುವುದು ಕಂಡುಬರುತ್ತಿದೆ.

ಗೋಮಯ, ಗೋಮೂತ್ರ: ಔಷಧಗಳೋ, ಅಪಮಾನವೋ?

ಮನುಷ್ಯ ಕೃಷಿಕಾರ್ಯಗಳಲ್ಲಿ ತೊಡಗಿದಾಗ ತನಗೆ ನೆರವಾಗಲೆಂದು ಆಕಳನ್ನು ಸಾಕಲಾರಂಭಿಸಿದ.[1] ಇಂದು ಕೃಷಿಕೆಲಸಗಳು ಸಾಕಷ್ಟು ಯಾಂತ್ರೀಕೃತಗೊಂಡಿರುವುದರಿಂದ ಸಾಕಲ್ಪಟ್ಟ ಮೂಲ ಉದ್ದೇಶಕ್ಕೆ ಈ ಪ್ರಾಣಿಗಳು ಅಪ್ರಸ್ತುತವೆನಿಸಿಬಿಟ್ಟಿವೆಯಾದರೂ, ಕೃಷಿಪ್ರಧಾನವಾದ ನಮ್ಮ ಸಮಾಜದಲ್ಲಿ ಅವುಗಳಿಗಿದ್ದ ಪ್ರಾಮುಖ್ಯತೆಯನ್ನು ಇನ್ನಷ್ಟು ಎತ್ತರಕ್ಕೇರಿಸಿ, 'ಎರಡನೇ ತಾಯಿ',[2] 'ವಿಶ್ವದ ಮಾತೆ'[3,4] ಎಂಬಿತ್ಯಾದಿಯಾಗಿ ಬಿಂಬಿಸುವ ಪ್ರಯತ್ನಗಳೀಗ ವ್ಯವಸ್ಥಿತವಾಗಿ ನಡೆಯುತ್ತಿವೆ. 'ಗೋ ಮಾತೆಯ' ರಕ್ಷಣೆಗಾಗಿ ನಡೆಯುತ್ತಿರುವ 'ಹೋರಾಟಗಳು',[4,5] ದನದ ಗೌರವ ರಕ್ಷಣೆಗಾಗಿ ನಡೆದ ದಲಿತರ ಕೊಲೆಗಳು ಮತ್ತು ಹಲವಾರು ದೊಂಬಿಗಳನ್ನು[6,7] ನೋಡಿದಾಗ, ನಮ್ಮ ದೇಶದಲ್ಲಿ ಮನುಷ್ಯನ ಜೀವಕ್ಕಿಂತ ಸತ್ತಿರುವ ದನದ ಸ್ಥಾನಮಾನವೇ ಹೆಚ್ಚೆಂದು ಅನಿಸದಿರಲಾರದು.

ಚಿಕುಂಗುನ್ಯಾ ರೋಗಕ್ಕೆ 'ಬದಲಿ ಚಿಕಿತ್ಸೆ': ಸುಳ್ಳುಗಳು ಮತ್ತು ಪೊಳ್ಳು ಆಧಾರಗಳು

ಇತ್ತೀಚೆಗೆ ರಾಜ್ಯದಲ್ಲಿ ಚಿಕುಂಗುನ್ಯಾ ರೋಗವು ಹರಡಿದ ಸಂದರ್ಭದಲ್ಲಿ, ರೋಗ ನಿಯಂತ್ರಣಕ್ಕಾಗಿ ಹೋಮಿಯೋಪತಿ ಔಷಧಗಳನ್ನು ವಿತರಿಸುವ ಶಿಬಿರಗಳನ್ನು ಆರೋಗ್ಯ ಇಲಾಖೆಯ ವತಿಯಿಂದ ಎಲ್ಲೆಡೆಗಳಲ್ಲೂ ನಡೆಸಲಾಯಿತು. ಸರಕಾರದ ಈ ನಿರ್ಧಾರಕ್ಕೆ ವೈಜ್ಞಾನಿಕ ಆಧಾರಗಳೇನೆಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ನಿರ್ದೇಶನಾಲಯದ ಮಾಹಿತಿ ಅಧಿಕಾರಿಗಳಿಂದ ಮಾಹಿತಿ ಕಾಯಿದೆ, 2005ರಡಿಯಲ್ಲಿ ಮಾಹಿತಿಯನ್ನು ಕೋರಲಾಯಿತು. ಒಂದೆಡೆ, ಹೋಮಿಯೋಪತಿ ಔಷಧಗಳನ್ನು ವಿತರಿಸಿದ ಬಗ್ಗೆ ತಮಗೇನೂ ತಿಳಿದಿಲ್ಲವೆಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿಗಳು ಹೇಳಿದರೆ, ಇನ್ನೊಂದೆಡೆ, ಸಮಗ್ರ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸುವುದಕ್ಕೆ ಹಾಗೂ ಆಯುರ್ವೇದ ಮತ್ತು ಹೋಮಿಯೋಪತಿ ಔಷಧಗಳನ್ನು ಖರೀದಿಸುವುದಕ್ಕೆ ರೂ.

ಚಿಕುಂಗುನ್ಯಾಕ್ಕೆ 'ಬದಲಿ ಚಿಕಿತ್ಸೆ' ಇದೆಯೇ?

ವಿಪತ್ತನ್ನು ಎದುರಿಸಲು ನಾವು ಸರ್ವಸನ್ನದ್ಧರಾಗಿರುವುದು ಅಪರೂಪವೇ ಆಗಿರುವುದರಿಂದ ಅಂತಹದೇನಾದರೂ ಧುತ್ತನೆ ಬಂದೆರಗಿದರೆ ತಡಬಡಾಯಿಸುವುದು ಸಾಮಾನ್ಯ ಕ್ರಮವೇ ಆಗಿಬಿಟ್ಟಿದೆ. ಅಂತಹಾ ಸಂದರ್ಭಗಳನ್ನು 'ಸದುಪಯೋಗಪಡಿಸಿಕೊಳ್ಳಲು' ಯತ್ನಿಸುವವರೂ ಬೇಕಷ್ಟಿದ್ದಾರೆ. ಇತ್ತೀಚೆಗೆ ದಕ್ಷಿಣ ಕನ್ನಡ ಹಾಗೂ ಇತರ ಜಿಲ್ಲೆಗಳಲ್ಲಿ ಚಿಕುಂಗುನ್ಯಾ ರೋಗವು ಹರಡಲಾರಂಭಿಸಿದ ಸಂದರ್ಭದಲ್ಲಿಯೂ ಇಂತಹುದೇ ನಡೆಯಿತು. ರೋಗದ ನಿಯಂತ್ರಣಕ್ಕೆ ಯಾವುದೇ ಯೋಚನೆಗಳಾಗಲೀ, ಯೋಜನೆಗಳಾಗಲೀ ಇಲ್ಲದಿದ್ದ ಆರೋಗ್ಯ ಇಲಾಖೆಯ ಅಧಿಕಾರಿಗಳು, ಆಧುನಿಕ ವೈದ್ಯಶಾಸ್ತ್ರದಲ್ಲಿ ಚಿಕುಂಗುನ್ಯಾ ರೋಗಕ್ಕೆ ಔಷಧಗಳಾಗಲೀ, ತಡೆಯಬಲ್ಲ ಉಪಾಯಗಳಾಗಲೀ ಇಲ್ಲವೆಂದು ತಮ್ಮ ಕೈತೊಳೆದುಕೊಂಡರು.

ಚಿಕುನ್ ಗುನ್ಯಾ, ಡೆಂಗೀ, ಇಲಿ ಜ್ವರ ಮತ್ತು ಮಲೇರಿಯಾ ರೋಗಗಳನ್ನು ಗುರುತಿಸಲು ಸುಲಭ ಸೂತ್ರಗಳು

ದಕ್ಷಿಣ ಕನ್ನಡ ಜಿಲ್ಲೆಯ ಬಹು ಭಾಗಗಳಿಗೆ ಚಿಕುನ್ ಗುನ್ಯಾ ಸೋಂಕು ವ್ಯಾಪಿಸಿದ್ದು, ಕೆಲವೊಂದು ಸಾವಿನ ಪ್ರಕರಣಗಳೂ ವರದಿಯಾಗಿವೆ. ಅದರ ಜೊತೆಗೆ, ಕೆಲವೆಡೆಗಳಲ್ಲಿ ಡೆಂಗೀ, ಇಲಿ ಜ್ವರ ಹಾಗೂ ಮಲೇರಿಯಾ ರೋಗಗಳು ಕೂಡಾ ಹರಡುತ್ತಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಇದರಿಂದಾಗಿ ಜನಸಾಮಾನ್ಯರಲ್ಲಿ ವಿಪರೀತವಾದ ಭಯ ಹಾಗೂ ಆತಂಕಗಳಿಗೆ ಮತ್ತು ವೈದ್ಯಕೀಯ ಸಮುದಾಯದಲ್ಲಿ ಹಲವಾರು ಗೊಂದಲಗಳಿಗೆ ಕಾರಣವಾಗಿದೆ. ಈ ಎಲ್ಲ ಸೋಂಕು ರೋಗಗಳನ್ನು ಸರಿಯಾಗಿ ಗುರುತಿಸಿ, ಸೂಕ್ತವಾದ ಚಿಕಿತ್ಸೆಯನ್ನು ನೀಡಲು ನೆರವಾಗಬಲ್ಲ ಸರಳ ಸೂತ್ರಗಳ ತುರ್ತು ಅಗತ್ಯವಿರುವುದರಿಂದ, ಲಭ್ಯವಿರುವ ವೈಜ್ಞಾನಿಕ ಮಾಹಿತಿಯ ಆಧಾರದಲ್ಲಿ, ಈ ಕೆಳಗಿನ ಸಲಹೆಗಳನ್ನು ನೀಡಬಯಸುತ್ತೇವೆ:

ಚಿಕುನ್ ಗುನ್ಯಾಕ್ಕೆ ಚಿಕಿತ್ಸೆ: ಇಲ್ಲವೋ ಅಥವಾ ಬೇಡವೋ?

ಉತ್ತರ ಕರ್ನಾಟಕದ ವಿವಿಧ ಭಾಗಗಳ ಜನರನ್ನು ಈಗಾಗಲೇ ಕಾಡಿದ ಚಿಕುನ್ ಗುನ್ಯಾ ಸೋಂಕು ಇದೀಗ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸಿದೆ. ಸಾವಿರಾರು ಜನ ಸೋಂಕನ್ನು ತಗಲಿಸಿಕೊಂಡಿದ್ದು, ಅದರ ನಿಯಂತ್ರಣಕ್ಕೆ ಸರಕಾರವು 'ಸಮರೋಪಾದಿಯಲ್ಲಿ' ಕಾರ್ಯಪ್ರವೃತ್ತವಾಗಿದೆ'ಯೆಂದು ಈಗಾಗಲೇ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬಗ್ಗೆ ಸರಕಾರದ ಜಾಹೀರಾತೊಂದು ನಾಡಿನ ಪ್ರಮುಖ ದೈನಿಕಗಳಲ್ಲಿ ಪ್ರಕಟವಾಗಿದೆ.

'ಮಾನವ ಇನ್ಸುಲಿನ್' ಎಂಬ ಮಹಾ ಮೋಸ

ಮಧುಮೇಹ ರೋಗದ ಚಿಕಿತ್ಸೆಯು ಒಂದು ಅತಿ ದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ ಎಂದರೆ ತಪ್ಪಾಗದು. ಅತಿ ಕಿರಿಯ ವಯಸ್ಸಿನಿಂದಲೇ ತಿನ್ನಬಹುದಾದ ಸಂಸ್ಕರಿತ ಆಹಾರಗಳನ್ನು ತಯಾರಿಸಿ, ಆಕರ್ಷಕವಾದ ಜಾಹೀರಾತುಗಳ ಮೂಲಕ ಅವನ್ನು ಮಾರಾಟ ಮಾಡಿ, ಆಧುನಿಕತೆಯ ರೋಗಗಳಾದ ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗ ಇತ್ಯಾದಿಗಳಿಗೆ ಕಾರಣವಾಗುತ್ತಿರುವ ಬಹುರಾಷ್ಟ್ರೀಯ ಆಹಾರೋದ್ಯಮ ಒಂದೆಡೆ. ಮಧುಮೇಹವು ಒಂದು ಭೀಕರವಾದ ಕಾಹಿಲೆಯೆಂದೂ, ಅದೀಗ ವಿಪರೀತವಾಗಿ ಹೆಚ್ಚುತ್ತಿದೆಯೆಂದೂ, ಅದಕ್ಕೆ ಆರಂಭದಿಂದಲೇ ಚಿಕಿತ್ಸೆಯನ್ನು ನೀಡಬೇಕಾದದ್ದು ಅತ್ಯಗತ್ಯವೆಂದೂ ಬೊಬ್ಬಿಡುತ್ತಿರುವ ಬಹುರಾಷ್ಟ್ರೀಯ ಔಷಧ ಕಂಪೆನಿಗಳು ಇನ್ನೊಂದೆಡೆ.

ಪಶು ಹಾಲಿನ ಪಾನ: ತಾಯ್ತನಕ್ಕೆ ಅಪಮಾನ, ರೋಗಗಳಿಗೆ ಆಹ್ವಾನ

ಹಾಲಿನ ಬಗ್ಗೆ ಕೆಟ್ಟದ್ದನ್ನು ಹೇಳಿದರೆ ಒಪ್ಪುವವರ ಸಂಖ್ಯೆಯು ಅತಿ ವಿರಳ. ಮನುಷ್ಯನ ಜೀವನದೊಂದಿಗೆ ಬಹಳ ಭಾವನಾತ್ಮಕವಾಗಿ ಬೆರೆತಿರುವ 'ಆಹಾರ'ವೆಂದರೆ ಹಾಲು. ಹುಟ್ಟಿದ ಘಳಿಗೆಯಿಂದ ಕೊನೆಯ ತನಕ ಮನುಷ್ಯನು ಸೇವಿಸುವ 'ಆಹಾರ'ವೊಂದಿದ್ದರೆ ಅದು ಹಾಲೇ ಅಲ್ಲವೆ? ಶತ-ಶತಮಾನಗಳಿಂದ ಮನುಷ್ಯನು ಕುಡಿಯುತ್ತಿರುವ ಈ ಹಾಲು ಅಮೃತವಲ್ಲವೇ?

ಹೌದೆ?

ಮಕ್ಕಳಲ್ಲಿ ಗ್ಯಾಸ್ಟ್ರಿಕ್ ತೊಂದರೆ ಮತ್ತದಕ್ಕೆ ಹೊಸಾ ಔಷಧ!

ಕೆಲದಿನಗಳ ಹಿಂದೆ ಹಿರಿಯರೊಬ್ಬರನ್ನು ಆಸ್ಪತ್ರೆಯಲ್ಲಿ ದಾಖಲಿಸಿದ್ದೆ. ಮರುದಿನ ಅವರನ್ನು ನೋಡಲೆಂದು ಹೋಗಿದ್ದಾಗ ಅವರ ಕೊಠಡಿಯ ಹೊರಗೆ ನಿಂತಿದ್ದ ಸುಮಾರು ಎರಡು ವರ್ಷದ ಮಗುವೊಂದು ಪೊಟ್ಟಣವೊಂದರಿಂದ ಕುರುಂಕುರುಂ ತಿಂಡಿಯನ್ನು ಬಾಯಿಯೊಳಗೆ ತುರುಕಿಕೊಂಡು ತಿನ್ನುತ್ತಿದ್ದುದನ್ನು ನೋಡಿದೆ. ನಾನು ಒಳಹೊಕ್ಕಾಗ ಆ ಮಗುವೂ ನನ್ನ ಹಿಂದೆಯೇ ಬಂದಳು. ನಾನು ರೋಗಿಯನ್ನು ಪರೀಕ್ಷಿಸಿ ಇನ್ನೇನು ಹೊರ ನಡೆಯುವುದರಲ್ಲಿದ್ದಾಗ ಅಲ್ಲೇ ಇದ್ದ ಮೇಜಿನ ಮೇಲೆ ಅಂಟಾಸಿಡ್ ನ ಬಾಟಲಿಯೊಂದು ನನ್ನ ಕಣ್ಣಿಗೆ ಬಿತ್ತು. ನಾನು ಇದನ್ನು ಬರೆದೇ ಇಲ್ಲವಲ್ಲ, ಇದೇಕೆ ಇಲ್ಲಿದೆ ಅಂತ ದಾದಿಯಲ್ಲಿ ವಿಚಾರಿಸಿದೆ.
“ಇಲ್ಲ, ಅದು ಅವರದ್ದಲ್ಲ, ನನ್ನ ಮಗುವಿಗೆ ಮಕ್ಕಳ ವೈದ್ಯರು ಬರೆದು ಕೊಟ್ಟದ್ದು” ಅಂದಳು ನನ್ನ ರೋಗಿಯ ಮಗಳು.
“ಯಾಕೆ” ಅಂದೆ.

Are We Prescribing Only What Is Needed?

Modern medicine has undergone a sea change. This change is just not limited to newer diagnostic aids, newer drugs, newer approaches to treatment modalities but also invaded the prescription which have become voluminous in terms of number of drugs advised. Are they subject to some form of scrutiny? It is not that all of them are illogical or they do not have scientific literature to back their claim, but do we need drugs with marginal benefits? There is real situation wherein patients tend to consume this at the expense of core drugs. This becomes an important issue in a country like ours where resource based medicine takes precedence. My objective would be served if it provokes thinking on these lines.

Syndicate content